ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಸಂತೋಷ್ ಶಕ್ತಿನಗರ, ‘ಶಕ್ತಿ ನಗರ, ಇಡ್ಯಾ ಮತ್ತು ಸುರತ್ಕಲ್ನಲ್ಲಿ ನಿವೇಶನ, ಮನೆಗಳ ಹಂಚಿಕೆಗಾಗಿ ಸಿದ್ಧಪ ಡಿಸಿರುವ ಫಲಾನುಭವಿಗಳ ಆಯ್ಕೆಪಟ್ಟಿ ಯಲ್ಲಿ ದೋಷವಿದೆ. ಸಮಿತಿಗೆ ನೀಡಿದ ಭರವಸೆಯನ್ನು ಬದಿಗೊತ್ತಿ, ಅನರ್ಹ ವ್ಯಕ್ತಿಗಳನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ತಕ್ಷಣವೇ ಆ ಪಟ್ಟಿಯನ್ನು ರದ್ದು ಮಾಡುವಂತೆ ಒತ್ತಾಯಿಸಿ ಹೋರಾಟ ಆರಂಭಿಸಲಾ ಗುವುದು’ ಎಂದರು.