ಜಿಲ್ಲೆಯಲ್ಲಿ 66,602 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದೆ. ಅತಿ ಹೆಚ್ಚು ಅರಸೀಕೆರೆ ತಾಲ್ಲೂಕಿನಲ್ಲಿ 27,837 ಹೆಕ್ಟೇರ್, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 25,217 ಹೆಕ್ಟೇರ್ನಲ್ಲಿ ಬೆಳೆಯಲಾಗಿದೆ. ಮುಂಗಾರು, ಹಿಂಗಾರು ಕೈ ಕೊಟ್ಟ ಕಾರಣ 23,218 ಹೆಕ್ಟೇರ್ ತೆಂಗು ನಾಶವಾಗಿದೆ. ಅರಸೀಕೆರೆಯಲ್ಲಿ 16,191 ಹೆಕ್ಟೇರ್, ಚನ್ನರಾಯಪಟ್ಟಣದಲ್ಲಿ 14,217 ಹೆಕ್ಟೇರ್ನಲ್ಲಿ ಬೆಳೆ ನಾಶವಾಗಿದೆ. ಬೆಳೆ ಹಾನಿಯಿಂದ ಬೆಳೆಗಾರರಿಗೆ ₹44 ಕೋಟಿ ನಷ್ಟವಾಗಿದೆ.