‘ಗೂಢ ಉದ್ದೇಶ’ (ವಾ.ವಾ., ಏ. 19) ಓದಿದೆ. ವಸುಧೇಂದ್ರ ಹೇಳಿದಂತೆ ಇದು ಗೂಢ ಉದ್ದೇಶವೇನೂ ಅಲ್ಲ. ಸಾಹಿತ್ಯದಲ್ಲೂ ಎಡಪಂಥ ಮತ್ತು ಬಲಪಂಥ ಎಂಬ ಗುಂಪುಗಳಿರುವುದು ನಿಜ. ಅವು ತಮ್ಮ ತಮ್ಮ ತತ್ವ ಸಿದ್ಧಾಂತಗಳ ಮೂಲಕ ಸಮಾಜವನ್ನು ಮುನ್ನಡೆಸಬೇಕೆಂಬ ಉದ್ದೇಶ ಹೊಂದಿರುವುದೂ ನಿಜ. ಆದ್ದರಿಂದ ತಮ್ಮೊಂದಿಗೆ ಯಾರ್ಯಾರಿದ್ದಾರೆ ಎಂಬ ಪಟ್ಟಿ ನೀಡುವುದು ಸರಿಯೇ ಆಗಿದೆ.