ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕುಡ್ಲ ಎಕ್ಸ್ಪ್ರೆಸ್ ರೈಲಿನಲ್ಲಿ ಸಕಲೇಶಪುರಕ್ಕೆ ಬಂದು ಇಳಿದ ಬೆಂಗಳೂರಿನ ಬಿ.ಜಿ.ನಗರ ನಿವಾಸಿಗಳಾದ ಜಮೀನಾ ಹಾಗೂ ಪುತ್ರ ಮುಫೀಸ್ (2) ಕಾಲು ಕಳೆದುಕೊಂಡಿದ್ದಾರೆ. ‘ರೈಲು ನಿಲ್ಲುವುದಕ್ಕೂ ಮುನ್ನವೇ ಇಳಿಯಲು ಮುಂದಾದಾಗ ಕಾಲಿಗೆ ಬಟ್ಟೆ ಸಿಲುಕಿ ಜಾರಿ ಬಿದ್ದು ಅವಘಡ ಸಂಭವಿಸಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.