ನವಲಗುಂದ: ಪಕ್ಕದ ಮನೆಯ ಯುವಕ ಪತ್ನಿಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿರುವ ಪತಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿ ಶಾಹಿದಾ (28) ಇದೇ 12 ರಂದು ನಸುಕಿನಲ್ಲಿ ಮನೆಯಲ್ಲಿದ್ದ ₹70 ಸಾವಿರ ನಗದು ಹಾಗೂ ಮೂರೂವರೆ ತೊಲೆ ಬಂಗಾರವನ್ನು ತೆಗೆದುಕೊಂಡು ಪಕ್ಕದ ಮನೆಯ ರಂಗಪ್ಪ ಗುಡಾರದ (28) ಎಂಬಾತನ ಜೊತೆ ಹೋಗಿರುವ ಸಾಧ್ಯತೆ ಇದ್ದು, ಪಕ್ಕದ ಮನೆ ಯುವಕ ಅಪಹರಿಸಿರುವ ಶಂಕೆ ಇದೆ ಎಂದು ಇಮಾಮಸಾಬ್ ಬೈಲಹುಲಿ ಪೊಲೀಸ ರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಡಕಾಯಿತಿ: 7 ಮಂದಿ ಬಂಧನತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ಬುಧವಾರ ಮಧ್ಯರಾತ್ರಿ ಲಾರಿ ಯೊಂದನ್ನು ತಡೆದು ಚಾಲಕನಿಗೆ ಚಾಕು ತೋರಿಸಿ ಬೆದರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಶನಿವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಪಟ್ಟಣದ ನಿವಾಸಿಗಳಾದ ಶರೀಫ ಗೋವನಕೊಪ್ಪ (19), ಇಮಾಮಸಾಬ್ ಸುಂಕದ (30), ಯಾಸೀನ್ ನೀಲಿ (27), ರಿಯಾಜ್ ಜಮಖಾನ (23), ಶೌಕತ್ ಅಲಿ ಗುಡಿಸಾಗರ (19), ಮಹ್ಮದ್ ಧಾರವಾಡ (22) ಹಾಗೂ ಇಮ್ತಿಯಾಜ್ (23) ಬಂಧಿತರು.
ಅನುತ್ತೀರ್ಣ: ವಿದ್ಯಾರ್ಥಿ ನಾಪತ್ತೆ
ನವಲಗುಂದ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿ ಮನ ನೊಂದು ಮನೆ ಬಿಟ್ಟು ಹೋಗಿದ್ದಾನೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂ ಕಿನ ಕುಕನೂರ ಗ್ರಾಮದ ಶಾಲೆಯಲ್ಲಿ ದೇವರಾಜ ಹಕಾರಿ (16) ಓದುತ್ತಿದ್ದ. ರಜೆ ಇದ್ದ ಕಾರಣ ತಾಲ್ಲೂಕಿನ ಶಿರಕೋಳ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಕಲ್ಮೇಶ್ವರ ಜಾತ್ರೆಗೆಂದು ಬಂದಿದ್ದ. ಆದರೆ, ಪರೀಕ್ಷೆ ಯಲ್ಲಿ ಅನುತ್ತೀರ್ಣನಾದ ವಿಷಯ ತಿಳಿದ ಆತ ಮನೆಯವರಿಗೆ ಹೇಳದೆ ಹೋಗಿ ದ್ದಾನೆ ಎಂದು ತಂದೆ ಅಂದಪ್ಪ ಹಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.