ಸಂವಾದದಲ್ಲಿ ದಕ್ಷಿಣಾಮೂರ್ತಿ ಎಂಬುವವರು, ‘ಪ್ರಶಸ್ತಿಗಳ ಮೊತ್ತ ಹೆಚ್ಚಿಸುತ್ತಿರುವುದು ಎಷ್ಟು ಸರಿ?’ ಎಂಬ ಪ್ರಶ್ನೆ ಎತ್ತಿದರು. ಇದಕ್ಕೆ ಉತ್ತರಿಸಿದ ಕವಿ ಡಾ.ಸಿದ್ದಲಿಂಗಯ್ಯ, ‘ಪ್ರಶಸ್ತಿಗಳ ಮೊತ್ತ ಹೆಚ್ಚಿಸುತ್ತಿರುವುದು ಸೂಕ್ತವಾಗಿದೆ. ಸಾಹಿತಿಗಳನ್ನು ಸನ್ಮಾನ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕರೆದು ಅವರಿಗೆ ಬಸ್ ಚಾರ್ಜ್ ನೀಡದೆಯೂ ಕಳುಹಿಸಿರುವ ಪ್ರಸಂಗಗಳಿವೆ. ಪ್ರಶಸ್ತಿಗೆ ಶ್ರೇಷ್ಠರನ್ನೇ ಆಯ್ಕೆ ಮಾಡುವಾಗ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು’ ಎಂದರು.