ನ್ಯಾಯಗೆರೆ ಗ್ರಾಮದಲ್ಲಿ ಮಳೆ ಗಾಳಿಗೆ ಅಡಿಕೆ ಮತ್ತು ತೆಂಗಿನ ಮರಗಳು ನೆಲಕಚ್ಚಿವೆ. ರೈತ ಮಹಾಲಿಂಗಪ್ಪ, ಮಹಾಲಕ್ಷ್ಮಿ, ಹನುಮಂತರಾಯಪ್ಪ, ಕೃಷ್ಣಪ್ಪ, ಮಹದೇವಪ್ಪ ಅವರಿಗೆ ಸೇರಿದ ಅಡಿಕೆ ಮತ್ತು ತೆಂಗಿನ ಮರಗಳು ನೆಲಕ್ಕೆ ಉರುಳಿವೆ. ರಸ್ತೆ ಬದಿಯ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿದೆ. ಇದೇ ಗ್ರಾಮದ ಗುರುಶಾಂತಪ್ಪ, ಮುದ್ದಪ್ಪ, ರಮೇಶ್, ಪುಟ್ಟಮ್ಮ ಅವರ ಮನೆ ಚಾವಣಿ ಶೀಟ್ಗಳು ಹಾರಿವೆ. ಮನೆಯಲ್ಲಿದ್ದ ಸಾಮಾನು ಮಳೆಯಲ್ಲಿ ತೋಯ್ದು ಹೋಗಿವೆ. ಅಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಾಕಿದ್ದ ಚಾವಣಿಯೂ ಗಾಳಿಗೆ ಹಾರಿವೆ. ಸೈಕಲ್ ಹಾಗೂ ದ್ವಿಚಕ್ರ ವಾಹನ ಜಖಂಗೊಂಡಿವೆ.