ನಾಲ್ಕು ಪ್ರದೇಶ: ‘ಹೂಳು ತೆಗೆಯುವುದರಿಂದ ಜಲಾಶಯ ಕಟ್ಟಡಕ್ಕೆ ತೊಂದರೆಯಾಗಬಾರದು ಎಂದು ತುಂಗಭದ್ರಾ ಮಂಡಳಿಯು ಎಚ್ಚರಿಕೆ ನೀಡಿರುವುದರಿಂದ ಜಲಾಶಯದಿಂದ ದೂರವಿರುವ ವ್ಯಾಸನಕೆರೆ, ಡಣಾಯನಕೆರೆ, ಲೋಕಪ್ಪನ ಕೆರೆ, ಹಂಪನಕಟ್ಟೆ ಸಮೀಪದ ಹೂಳು ತೆಗೆಯಲಾಗುವುದು. 18ರಂದು ವ್ಯಾಸನಕೆರೆ ಹತ್ತಿರ ಪ್ರಾಯೋಗಿಕವಾಗಿ ಹೂಳನ್ನು ತೆಗೆಯಲು ನಿರ್ಧರಿಸಲಾಗಿದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.