ದಕ್ಷಿಣ ಸುಡಾನ್ನಲ್ಲಿ ಈಗ ಭೀಕರ ಕ್ಷಾಮ. ಹಸಿವಿನಿಂದ ತತ್ತರಿಸಿರುವ ಜನರೆಲ್ಲ ವಿಶ್ವಸಂಸ್ಥೆ ತೆರೆದಿರುವ ಸಂತ್ರಸ್ತರ ಪುನರ್ವಸತಿ ಕೇಂದ್ರಗಳಿಗೆ ಲಗ್ಗೆ ಹಾಕುತ್ತಿದ್ದಾರೆ. ಪುನರ್ವಸತಿ ಕೇಂದ್ರದಲ್ಲಿ ಉಳಿದಿಕೊಂಡಿರುವ ಈ ಬಾಲಕನಿಗೆ ಹಸಿದ ಹೊಟ್ಟೆ ಯಾವಾಗ ತುಂಬೀತು ಎನ್ನುವುದಷ್ಟೇ ಚಿಂತೆ. ಅಲ್ಲವೆ ಮತ್ತೆ, ಶಾಲೆಗೆ ಹೋಗುವ, ಆಟ–ಪಾಠದಲ್ಲಿ ತೊಡಗುವ ಕನಸುಗಳಿಗೆ ಹಸಿದ ಹೊಟ್ಟೆಗಳ ಈ ಶಿಬಿರದಲ್ಲಿ ಎಲ್ಲಿದ್ದೀತು ತಾವು?