ಮನೆಯ ವಿಳಾಸವನ್ನೂ ಬರೆದುಕೊಂಡಿದ್ದಾರೆ. ನಂತರ ಅಂಚೆ ಮೂಲಕ ಬಾಕ್ಸ್ ಕಳುಹಿಸಿ ಹಣಕೊಟ್ಟು ಬಿಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಅಂಚೆ ಇಲಾಖೆ ಸಿಬ್ಬಂದಿಗೆ ಸಂಶಯ ಬಂದು ಇವೆಲ್ಲ ಮೋಸದ ವ್ಯವಹಾರವಾಗಿರುವುದರಿಂದ ಎಚ್ಚರಿಕೆ ವಹಿಸುವಂತೆ ತಿಳಿವಳಿಕೆಯನ್ನೂ ನೀಡಿದ್ದಾರೆ.
ಕುತೂಹಲ ತಾಳಲಾಗದೆ ಮಲ್ಲಿಕಾರ್ಜುನನ ಸಹೋದರ ಯಲ್ಲಾಲಿಂಗ ನಾಗನಕೇರಾ ₹ 1,600 ಹಣ ಪಾವತಿಸಿದಾಗ ಅದರಲ್ಲಿ ಪ್ಲಾಸ್ಟಿಕ್ ಮೂರ್ತಿ ಹಾಗೂ ಅಲ್ಯುಮಿನಿಯಂನ ಸರ ಇತ್ತು. ನೀರು ತಗುಲಿದ ತಕ್ಷಣ ಅದರ ಬಣ್ಣವೂ ಮಾಸಿ ಹೋಗಿದೆ.
ವಂಚಕರು 98451 54861 ಮೊಬೈಲ್ ಸಂಖ್ಯೆಯಿಂದ ಕರೆ ಮಾಡುತ್ತಿದ್ದಾರೆ. ಮೋಸ ಹೋದವರಲ್ಲಿ ಬೀದರ್ ತಾಲ್ಲೂಕಿನ ಗ್ರಾಮಸ್ಥರೇ ಅಧಿಕ ಸಂಖ್ಯೆಯಲ್ಲಿದ್ದಾರೆ.