ನವದೆಹಲಿ: ಗೋಹತ್ಯೆ ನಿಷೇಧವನ್ನು ಬಿಜೆಪಿ ಹಾಗೂ ಸಂಘ ಪರಿವಾರ ಬೆಂಬಲಿಸುತ್ತವೆ. ಆದರೆ ಗೋರಕ್ಷಣೆ ಹೆಸರಲ್ಲಿ ನಡೆಯುವ ಗೂಂಡಾಗಿರಿಯನ್ನು ಖಂಡಿಸುತ್ತವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಗೂಂಡಾಗಿರಿ ನಡೆಸುವವರು ನಮ್ಮ ಜನರಲ್ಲ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಗೋರಕ್ಷಕರ ತಂಡವನ್ನು ಬಿಜೆಪಿ ಜತೆಗೆ ತಳಕು ಹಾಕುವುದು ಸರಿಯಲ್ಲ ಎಂದೂ ಅವರು ಹೇಳಿದ್ದಾರೆ.