ಈಗಾಗಲೇ ಜಿಲ್ಲೆಯಲ್ಲಿ ಉತ್ತಮ ಮುಂಗಾರು ಪ್ರಾರಂಭವಾಗಿದೆ. ಕೆರೆ, ಕಟ್ಟೆ ಒತ್ತುವರಿ ಆಗಿರುವುದರಿಂದ ಮಳೆ ನೀರು ಸಂಗ್ರಹಕ್ಕೆ ಸಮಸ್ಯೆಯಾಗಿದೆ. ತಾಲ್ಲೂಕಿನ ಕಿತ್ತನಕೆರೆ ಗ್ರಾಮದ ಸರ್ವೆ ನಂ 114/1 ಕಟ್ಟೆ , ಹೊಸಹಳ್ಳಿ ಗ್ರಾಮ ಸರ್ವೆ ನಂ 42 ಗೋಕಟ್ಟೆ , ಸರ್ವೆ ನಂ 39 ರ ಕೆರೆ, ಸರ್ವೆ ನಂ 53 ಸಿದ್ದಪ್ಪ ಕಟ್ಟೆಗೆ ಲೋಕೋಪಯೋಗಿ ರಸ್ತೆಯಿಂದ ಸೇತುವೆ ಮಾಡಿ ಮೊದಲು ಬರುತ್ತಿದ್ದ ನೀರನ್ನು ಸಂಗ್ರಹ ಮಾಡಲು ಮತ್ತೆ ವ್ಯವಸ್ಥೆ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.