ಕಿತ್ತೂರುರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ, ಗಂಗೂಬಾಯಿ ಹಾನಗಲ್, ಸಾಲುಮರದ ತಿಮ್ಮಕ್ಕ, ಆಫ್ರಿಕಾದ ಪರಿಸರವಾದಿ ವಂಗಾರಿ ಮಾತಾ, ಕೋಲಾಟದಲ್ಲಿ ತೊಡಗಿದ ಹಕ್ಕಿಪಿಕ್ಕಿಗಳು (ಬಾಂಧವ್ಯ ಸೂಚಕ) ಇಲ್ಲಿನ ಶಿಲ್ಪಗಳಲ್ಲಿ ಅರಳಿ ನಿಂತರು. ಮಹಿಳಾ ವಿಶ್ವವಿದ್ಯಾಲಯ ಸಾಧಕಿಯರನ್ನು ಶಿಲ್ಪಗಳಲ್ಲಿ ಪ್ರತಿಬಿಂಬಿಸುವುದರ ಮೂಲಕ ಒಂದು ವಿಭಿನ್ನ ಪ್ರಯತ್ನ ಮಾಡಿದೆ.