ವಿಧಾನಸಭೆಯಲ್ಲಿ ಬುಧವಾರ ಉತ್ತರ ನೀಡಲು ಸಿದ್ದರಾಮಯ್ಯ ಆರಂಭಿಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ‘ನೀವು ಧರಿಸಿರುವ ರೇಷ್ಮೆ ಶಲ್ಯ, ಪಂಚೆ ನೋಡಿದರೆ ರೈತರ ಸಾಲ ಮನ್ನಾ ಮಾಡುವುದು ಖಾತ್ರಿಯಾಗುತ್ತದೆ’ ಎಂದು ಹೇಳಿದರು.
‘ಮೊದಲು ಟವೆಲ್ ಹಾಕುತ್ತಿದ್ದೆ. ಮಾತನಾಡುವಾಗಲೆಲ್ಲ ಅದು ಬಿದ್ದು ಹೋಗುತ್ತಿತ್ತು. ಅದಕ್ಕಾಗಿ ಈ ರೀತಿ ಶಲ್ಯ ಹಾಕಲು ಶುರು ಮಾಡಿದೆ. ಇದು ಮೈಸೂರು ಸಿಲ್ಕ್ ಶಲ್ಯ. ನಿನಗೂ ಅದನ್ನೇ ಕೊಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಹೇಳಿದರು.