ನೇಕಾರಿಕೆ ಉತ್ತರ ಕರ್ನಾಟಕದ ಜನರ ಪ್ರಮುಖ ಕಸುಬುಗಳಲ್ಲಿ ಒಂದು. ವಿವಿಧ ಕಾರಣಗಳಿಂದ ಈಗ ಈ ಕಸುಬಿಗೆ ಆಪತ್ತು ಬಂದೊದಗಿದೆ.
ನೇಕಾರಿಕೆ ಉದ್ಯಮವನ್ನು ಸಹ ಜಿಎಸ್ಟಿ ವ್ಯಾಪ್ತಿಗೆ ತರಲಾಗಿದ್ದು, ಇದರಿಂದ ನೇಕಾರರ ಬದುಕು ಅತಂತ್ರವಾಗಿದೆ. ಮೊದಲೇ ಸಂಕಷ್ಟದಲ್ಲಿದ್ದ ಉದ್ದಿಮೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯ ರೈತರ ಸಾಲ ಮನ್ನಾ ಆಗಿದೆ, ಅದೇ ರೀತಿ ನೇಕಾರರ ಸಾಲವನ್ನೂ ಸರ್ಕಾರ ಮನ್ನಾ ಮಾಡಲಿ. -ಕಿರಣ್ ಕರಲಟ್ಟಿ , ರಬಕವಿ