‘ಆರೋಪಿಗಳ ಕೃತ್ಯ ದೇಶದ್ರೋಹದ ಅಡಿ ಬರುವುದಿಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಅಲ್ಲದೆ ಅವರ ಮೇಲೆ ಈ ಹಿಂದೆಯೂ ಯಾವುದೇ ಅಪರಾಧ ಪ್ರಕರಣಗಳು ಇರಲಿಲ್ಲ. ಆದ್ದರಿಂದ ದೇಶದ್ರೋಹದ ಆರೋಪ ಕೈಬಿಟ್ಟು, ಕೋಮು ಸೌಹಾರ್ದ ಕದಡಿದ ಆರೋಪ ಹೊರಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಆರ್.ಎಸ್. ಪರಿಹಾರ್ ತಿಳಿಸಿದ್ದಾರೆ.