* ಸರ್ಕಾರದ ವಿರುದ್ಧ ಆಕ್ರೋಶ
ನವದೆಹಲಿ, ಜುಲೈ 13: ಅಸ್ಸಾಂ – ಪೂರ್ವ ಪಾಕಿಸ್ತಾನ ಗಡಿ ಭಾಗದ ಲಾಥಿತಿಲ್ಲಾ, ದುಮಬರಿ ಮತ್ತು ಇತರ ಎರಡು ಹಳ್ಳಿಗಳನ್ನು ತನ್ನ ವಶದಲ್ಲಿ ಇರಿಸಿಕೊಳ್ಳಲು ಪಾಕಿಸ್ತಾನಕ್ಕೆ ತಾತ್ಕಾಲಿಕವಾಗಿ ಅವಕಾಶ ನೀಡಲಾಗಿದೆ ಎಂದು ವಿದೇಶಾಂಗ ಸಚಿವ ಶ್ರೀ ಚಾಗ್ಲಾ ಅವರು ಲೋಕಸಭೆಯಲ್ಲಿ ಇಂದು ಸ್ಪಷ್ಟಪಡಿಸಿದರು. ಇದನ್ನು ಕೇಳಿದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಈ ಹಳ್ಳಿಗಳನ್ನು ಪಾಕಿಸ್ತಾನವು 1963ರಲ್ಲಿ ಆಕ್ರಮಿಸಿಕೊಂಡಿದೆ.