ಸಚಿವರ ಸಹೋದರಿ ಆಶಾ ಹಣಮಶೆಟ್ಟಿ ಹಾಗೂ ಭಾವ ಹಣಮಶೆಟ್ಟಿ ಅವರ ಹೆಸರಿನ ಮೇಲೆ ನಿಯಮ ಬಾಹಿರವಾಗಿ ಸಾಯಗಾಂವ್ ಖರೀದಿ ಕೇಂದ್ರದಲ್ಲಿ 38 ಕ್ವಿಂಟಲ್ ತೊಗರಿ ಮಾರಾಟ ಮಾಡಿದ್ದರೂ ಅವರಿಗೆ ಹಣ ಪಾವತಿಸಲಾಗಿದೆ ಎಂದು ಆರೋಪ ಮಾಡಿದರು. ರೈತರಾದ ಅಭಂಗರಾವ್ ಕಾರಬಾರಿ, ಬಾಲಾಜಿ ಜಾಧವರಾವ್, ಉಮಾಕಾಂತ ಜಾಧವರಾವ್, ಸರಸ್ವತಿ ಮಾಣಿಕಪ್ಪ ಡೊಂಗರಗೆ ಇದ್ದರು.