ಶಾಲೆಗಳಲ್ಲಿ ಬಿಸಿಯೂಟದ ಕೋಣೆಯನ್ನು ಸ್ವಚ್ಛವಾಗಿಡುವಂತೆ ಜಿಲ್ಲಾಧಿಕಾರಿ ಇದೇ ವೇಳೆ ಸೂಚಿಸಿದರು. ಜಿಲ್ಲೆಯಲ್ಲಿರುವ ಒಟ್ಟು ಮಕ್ಕಳ ಪೈಕಿ ಪರಿಶಿಷ್ಟ ಜಾತಿಯ 60,699 ಹಾಗೂ ಪರಿಶಿಷ್ಟ ಪಂಗಡದ 17,241 ಮಕ್ಕಳು ಇದ್ದಾರೆ ಎಂದು ಸಭೆಗೆ ತಿಳಿಸಲಾಯಿತು. ನಗರಾಭಿವೃದ್ದಿ ಯೋಜನೆಯಡಿ ನಗರಸಭೆ ಪೌರಾಯುಕ್ತರು, ಪುರಸಭೆ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಚುರುಕಾಗಿ ಕೆಲಸ ನಿರ್ವಹಿಸಬೇಕು ಎಂದರು. ನಂತರ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು.