ರಬಕವಿ ಬನಹಟ್ಟಿ: ‘ಜಗತ್ತಿನ ಆರ್ಥಿಕ ಚಿಂತಕರು, ಬುದ್ಧಿಜೀವಿಗಳು ಜನಸಂಖ್ಯೆಯ ಕುರಿತು ಚಿಂತನೆಗಳನ್ನು ನಡೆಸಿ ಜನಸಂಖ್ಯೆಯನ್ನು ನಿಯಂತ್ರಣ ಮಾಡದೇ ಹೋದರೆ ಮುಂಬರುವ ದಿನಗಳಲ್ಲಿ ಜಗತ್ತು ಸಂಪನ್ಮೂಲಗಳ ಕೊರತೆಯನ್ನು ಅನುಭವಿಸಿ, ತೀವ್ರ ಸಂಕಷ್ಟಕ್ಕೆ ಒಳಗಾಗಲಿದೆ’ ಎಂದು ಜಮಖಂಡಿಯ ಡಾ.ಎಚ್.ಜಿ. ದಡ್ಡಿ ತಿಳಿಸಿದರು.
ಅವರು ಮಂಗಳವಾರ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದಲ್ಲಿ ವಿಶ್ವ ಜನಸಂಖ್ಯಾ ಕುರಿತು ವಿಶೇಷ ಉಪನ್ಯಾಸ ನೀಡಿದರು.