ಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿ ಪದಾರ್ಥಗಳು ಸಂಜೆಯ ವೇಳೆ ಜೋರಾದ ಮಳೆ ನೀರಲ್ಲಿ ತೇಲುತ್ತಿದ್ದುದು ಕಂಡು ಬಂದಿತು. ವರ್ತಕರು ಅವುಗಳ ರಕ್ಷಣೆಗಾಗಿ ಪರದಾಡುತ್ತಿದ್ದರು. ಕೆಲವರು ಪ್ಲಾಸ್ಟಿಕ್ ಹಾಳೆಗಳ ನೆರವಿನಿಂದ ಕಿರಾಣಿ, ತರಕಾರಿ ವಸ್ತುಗಳನ್ನು ರಕ್ಷಿಸಿಕೊಳ್ಳುವಲ್ಲಿ ಮುಂದಾದರು. ಆದರೆ ಬಹುತೇಕ ಪದಾರ್ಥಗಳು, ಹಸಿ ತರಕಾರಿ, ಈರುಳ್ಳಿ ನೀರಿನಲ್ಲಿ ತೊಯ್ದು ಹೋದವು.