‘ತಹಶೀಲ್ದಾರ್ ಅವರನ್ನು ಕಚೇರಿಗೆ ಕರೆದೊಯ್ಯಲು ಬುಧವಾರ ಬೆಳಿಗ್ಗೆ ಕಾರು ಚಾಲಕ ವಸತಿ ಗೃಹಕ್ಕೆ ಧಾವಿಸಿದಾಗ ಬಾಗಿಲು ತೆರೆದಿಲ್ಲ. ಅನುಮಾನಗೊಂಡು ಅವರು ಕಿಟಕಿ ತೆರೆದು ಇಣುಕಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆಯ ದೃಷ್ಟಿಯಿಂದ ಡೆತ್ನೋಟ್ ಅನ್ನು ಪೊಲೀಸರು ಗೋಪ್ಯವಾಗಿಟ್ಟಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಮಾಹಿತಿ ನೀಡಿದ್ದಾರೆ. ಗುರುವಾರ ಮಂಡ್ಯದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.