‘ರಸೆಲ್ ಮಾರ್ಕೆಟ್ನ ಮಾಂಸ ಮಾರಾಟಗಾರರು ತಮಿಳುನಾಡಿನಿಂದ ಮಾಂಸ ತಂದು, ಶೀತಲ ಪೆಟ್ಟಿಗೆಗಳಲ್ಲಿ ವಾರಾನುಗಟ್ಟಲೆ ದಾಸ್ತಾನು ಇಡುತ್ತಿದ್ದರು. ವ್ಯಾಪಾರಿಗಳು ಸ್ವಚ್ಛತೆ ಕಾಪಾಡದ ಬಗ್ಗೆಯೂ ಸ್ಥಳೀಯ ನಿವಾಸಿಗಳಿಂದ ಪಾಲಿಕೆಗೆ ದೂರುಗಳು ಬಂದಿದ್ದವು. ದಾಳಿ ವೇಳೆ ಮಾಂಸದಂಗಡಿಗಳಿಗೆ ಬೀಗ ಮುದ್ರೆ ಹಾಕದಂತೆ ಪ್ರಭಾವಿ ವ್ಯಕ್ತಿಗಳಿಂದ ಸಾಕಷ್ಟು ಒತ್ತಡ ಬಂದರೂ ಅಧಿಕಾರಿಗಳು ಜಗ್ಗದೆ, ಬಾಗಿಲು ಮುಚ್ಚಿಸಿದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.