ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿ ಗಿರಿಯಲ್ಲಿ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್

Last Updated 20 ಜುಲೈ 2017, 6:45 IST
ಅಕ್ಷರ ಗಾತ್ರ

ತಿರುಪತಿ: ಕ್ರಿಕೆಟ್‌ ದೇವರು ಎಂದೇ ಖ್ಯಾತರಾಗಿರುವ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ ಗುರುವಾರ ತಿರುಮಲ ಗಿರಿಯ ವೆಂಕಟೇಶ್ವರ ದರ್ಶನ ಪಡೆದರು.

ಬುಧವಾರ ರಾತ್ರಿ ಹೈದರಾಬಾದ್‌ಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಸಚಿನ್‌ ಹಾಗೂ ಅವರ ಪತ್ನಿ ಅಂಜಲಿ ತಿರುಮಲ ದೇವಾಲಯಕ್ಕೆ ತೆರಳಿ  ದರ್ಶನ ಪಡೆದರು ಎಂದು ಮೂಲಗಳಿಂದ ತಿಳಿದು ಬಂದಿದೆ.

ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಮಂಡಳಿಯಿಂದ ರೇಷ್ಮೆ ಶಾಲು, ತೀರ್ಥ ಹಾಗೂ ಲಡ್ಡು ಪ್ರಸಾದ ನೀಡಿ ಸಚಿನ್‌ ಅವರನ್ನು ಗೌರವಿಸಲಾಗಿದೆ. ಪೂಜೆಯ ನಂತರ ಹೈದರಾಬಾದ್‌ಗೆ ಮರಳಿದ್ದಾರೆ.

ಉದ್ಯಮಿ ನಿಮ್ಮಗಡ್ಡ ಪ್ರಸಾದ್‌, ಮಾಜಿ ಕ್ರಿಕೆಟಿಗ ವಿ.ಚಾಮುಂಡೇಶ್ವರ ನಾಥ್‌ ಸಹ ಸಚಿನ್‌ರೊಂದಿಗೆ ದರ್ಶನ ಪಡೆದಿರುವುದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT