<p><strong>ತಿರುಪತಿ: </strong>ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಗುರುವಾರ ತಿರುಮಲ ಗಿರಿಯ ವೆಂಕಟೇಶ್ವರ ದರ್ಶನ ಪಡೆದರು.</p>.<p>ಬುಧವಾರ ರಾತ್ರಿ ಹೈದರಾಬಾದ್ಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಸಚಿನ್ ಹಾಗೂ ಅವರ ಪತ್ನಿ ಅಂಜಲಿ ತಿರುಮಲ ದೇವಾಲಯಕ್ಕೆ ತೆರಳಿ ದರ್ಶನ ಪಡೆದರು ಎಂದು ಮೂಲಗಳಿಂದ ತಿಳಿದು ಬಂದಿದೆ.</p>.<p>ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಮಂಡಳಿಯಿಂದ ರೇಷ್ಮೆ ಶಾಲು, ತೀರ್ಥ ಹಾಗೂ ಲಡ್ಡು ಪ್ರಸಾದ ನೀಡಿ ಸಚಿನ್ ಅವರನ್ನು ಗೌರವಿಸಲಾಗಿದೆ. ಪೂಜೆಯ ನಂತರ ಹೈದರಾಬಾದ್ಗೆ ಮರಳಿದ್ದಾರೆ.</p>.<p>ಉದ್ಯಮಿ ನಿಮ್ಮಗಡ್ಡ ಪ್ರಸಾದ್, ಮಾಜಿ ಕ್ರಿಕೆಟಿಗ ವಿ.ಚಾಮುಂಡೇಶ್ವರ ನಾಥ್ ಸಹ ಸಚಿನ್ರೊಂದಿಗೆ ದರ್ಶನ ಪಡೆದಿರುವುದಾಗಿ ಮೂಲಗಳು ತಿಳಿಸಿವೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ತಿರುಪತಿ: </strong>ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಗುರುವಾರ ತಿರುಮಲ ಗಿರಿಯ ವೆಂಕಟೇಶ್ವರ ದರ್ಶನ ಪಡೆದರು.</p>.<p>ಬುಧವಾರ ರಾತ್ರಿ ಹೈದರಾಬಾದ್ಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಸಚಿನ್ ಹಾಗೂ ಅವರ ಪತ್ನಿ ಅಂಜಲಿ ತಿರುಮಲ ದೇವಾಲಯಕ್ಕೆ ತೆರಳಿ ದರ್ಶನ ಪಡೆದರು ಎಂದು ಮೂಲಗಳಿಂದ ತಿಳಿದು ಬಂದಿದೆ.</p>.<p>ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಮಂಡಳಿಯಿಂದ ರೇಷ್ಮೆ ಶಾಲು, ತೀರ್ಥ ಹಾಗೂ ಲಡ್ಡು ಪ್ರಸಾದ ನೀಡಿ ಸಚಿನ್ ಅವರನ್ನು ಗೌರವಿಸಲಾಗಿದೆ. ಪೂಜೆಯ ನಂತರ ಹೈದರಾಬಾದ್ಗೆ ಮರಳಿದ್ದಾರೆ.</p>.<p>ಉದ್ಯಮಿ ನಿಮ್ಮಗಡ್ಡ ಪ್ರಸಾದ್, ಮಾಜಿ ಕ್ರಿಕೆಟಿಗ ವಿ.ಚಾಮುಂಡೇಶ್ವರ ನಾಥ್ ಸಹ ಸಚಿನ್ರೊಂದಿಗೆ ದರ್ಶನ ಪಡೆದಿರುವುದಾಗಿ ಮೂಲಗಳು ತಿಳಿಸಿವೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>