‘ಕೆರೆಯ ದುಸ್ಥಿತಿಯಿಂದ ನಿಸರ್ಗ ಬಡಾವಣೆ, ಅರಣ್ಯ ಬಡಾವಣೆ,ಜ್ಞಾನಭಾರತಿ, ವಳಗೇರಹಳ್ಳಿ ಬಡಾವಣೆಗಳ ನಾಗರಿಕರ ನಿತ್ಯದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ದುಸ್ಥಿತಿಯಲ್ಲಿರುವ ಕೆರೆಯನ್ನು ಸುಧಾರಿಸಲು ಕ್ರಮ ಕೈಗೊಂಡು ಆರು ವಾರಗಳಲ್ಲಿ ವರದಿ ಸಲ್ಲಿಸಬೇಕು’ ಎಂದು ಆಯೋಗವು ಬಿಡಿಎ ಆಯುಕ್ತರು ಹಾಗೂ ಜಲಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಸೂಚಿಸಿದೆ.