ಬುಧವಾರ ಸಂಜೆ ಇಲ್ಲಿನ ಇಂದ್ರಯಾಣಿ ಕಾರ್ನರ್ನಲ್ಲಿ 25ರ ಹರೆಯದ ಐಟಿ ಇಂಜಿನಿಯರ್ ಸತೀಶ್ ಪ್ರಭಾಕರ್ ಮೆಟೆ ಎಂಬವರ ಬೈಕ್ಗೆ ವಾಹನವೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಅಪಘಾತ ಸ್ಥಳದಲ್ಲಿ ಸತೀಶ್ ಸುಮಾರು 25ರಿಂದ 30 ನಿಮಿಷಗಳ ಕಾಲ ಬಿದ್ದು ಒದ್ದಾಡಿದ್ದರೂ ಅಲ್ಲಿದ್ದ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ರಸ್ತೆ ಬದಿಯಲ್ಲಿ ಮೂಕ ಪ್ರೇಕ್ಷಕರಾಗಿ ನಿಂತಿದ್ದ ಜನರು ಸತೀಶ್ ಅವರು ಒದ್ದಾಡುತ್ತಿರುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದರಲ್ಲಿ ಮಗ್ನರಾಗಿದ್ದರು.