ಮಳೆಯಿಂದಾಗಿ ಗುರುವಾರ ರಾತ್ರಿ ಮಾಕೋನಹಳ್ಳಿ ಬಳಿ ಖಾಸಗಿ ಕಾಫಿ ಎಸ್ಟೇಟಿನಲ್ಲಿ ಬೃಹತ್ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಕೊಟ್ಟಿಗೆಹಾರ, ಬಣಕಲ್, ಮತ್ತಿಕಟ್ಟೆ, ತರುವೆ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದಲೂ ವಿದ್ಯುತ್ ಪೂರೈಕೆ ಸ್ಥಗಿತವಾಗಿದ್ದು ಜನರು ಪರದಾಡಿದರೆ, ಬಹುತೇಕ ಹೋಟೆಲ್, ಗುಡಿಕೈಗಾರಿ ಕೆಗಳು ಬಾಗಿಲು ಮುಚ್ಚಿದ್ದವು.