ಕೋರ್ಟ್ಗೆ ಸರ್ಕಾರದ ವಾಗ್ದಾನ
‘ನಷ್ಟದಲ್ಲಿರುವ ಎನ್ಜಿಇಎಫ್, ನೌಕರರಿಗೆ ಬಾಕಿ ಹಣ ನೀಡುವಲ್ಲಿ ಹಾಗೂ ಬ್ಯಾಂಕ್ ಸಾಲ ತೀರಿಸುವಲ್ಲಿ ವಿಫಲವಾಗಿರುವ ಕಾರಣಕ್ಕೆ ಇದನ್ನು ಮುಚ್ಚಬೇಕು ಮತ್ತು ಅಧಿಕೃತ ಸಮಾಪನಕಾರರನ್ನು ನಿಯೋಜಿಸಬೇಕು’ ಎಂದು ಹೈಕೋರ್ಟ್ ಈ ಮೊದಲು ಆದೇಶಿಸಿತ್ತು. ಆದರೆ, ಇತ್ತಿಚೆಗಷ್ಟೇ ಕೋರ್ಟ್ಗೆ ವಾಗ್ದಾನ ನೀಡಿದ ಸರ್ಕಾರ, ‘ಸಾರ್ವಜನಿಕ ಉಪಯೋಗಕ್ಕಾಗಿ ಎನ್ಜಿಇಎಫ್ ಉಳಿಸಿಕೊಳ್ಳಲು ಸರ್ಕಾರ ಉತ್ಸುಕವಾಗಿದೆ’ ಎಂದು ತಿಳಿಸಿತ್ತು. ಈ ಕಾರಣಕ್ಕಾಗಿ ಕೋರ್ಟ್ ತನ್ನ ಮೊದಲಿನ ಆದೇಶವನ್ನು ಹಿಂಪಡೆದು ಯೋಜನಾ ವಿವರ ಸಲ್ಲಿಸಲು ನಿರ್ದೇಶನ ನೀಡಿದೆ.