ನಾಗಾರ್ಜುನಸಾಗರದ ಕ್ರೆಸ್ಟ್ಗೇಟ್: ರಾಜ್ಯಕ್ಕೆ ಕೇಂದ್ರ ಸರಕಾರ ಸರಿಯಾದ ತಿಳಿವಳಿಕೆ ನೀಡಿಲ್ಲ ಎಂದು ಮುಖ್ಯಮಂತ್ರಿ
ಬೆಂಗಳೂರು, ಆ. 19– ನಾಗಾರ್ಜುನಸಾಗರದ ಕ್ರೆಸ್ಟ್ ಗೇಟ್ ನಿರ್ಮಾಣ ಸಂಬಂಧದಲ್ಲಿ ಮೊದಲಿನಿಂದಲೂ ಮೈಸೂರು ರಾಜ್ಯಕ್ಕೆ ಕೇಂದ್ರವು ಸರಿಯಾದ ತಿಳಿವಳಿಕೆಯನ್ನು ನೀಡಿಲ್ಲವೆಂದು ತಮಗನಿಸುವುದೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ವರದಿಗಾರರೊಡನೆ ಮಾತನಾಡುತ್ತಾ ತಿಳಿಸಿದರು.