ಹಿಂದೆ ತುಳುನಾಡು ಕಾಸರಗೋಡಿ ನಿಂದ ಹೊನ್ನಾವರದವರೆಗೆ ಪಸರಿಸಿತ್ತು. ವಿಜಯನಗರ, ಹೊಯ್ಸಳ ರಾಜವಂಶ ಹೊರತುಪಡಿಸಿ ಬೇರಾವ ರಾಜಮನೆತನದ ಆಳ್ವಿಕೆಗೆ ತುಳುನಾಡು ಒಳಪಟ್ಟಿರಲಿಲ್ಲ ಎಂದ ಅವರು, ಹಲವು ರಾಜವಂಶಗಳು ಇಲ್ಲಿ ಆಳಿದ್ದು, ಅವರು ಜೈನರಾಗಿದ್ದು, ಶೈವ ದೇವಾಲಯಗಳನ್ನು ನಿರ್ಮಿಸಿದ್ದರು. ಅತ್ಯಂತ ಪ್ರಾಚೀನ ದೇವಾಲಯಗಳಾದ ಉದ್ಯಾವರದ ಶಂಭು ಕಲ್ಲು ದೇವಾಲಯ, ಸೂರಾಲಿನ ಮಹಾಲಿಂಗೇಶ್ವರ ದೇವಾಲಯಗಳ ಶೈಲಿ ಇಂದಿಗೂ ಎಲ್ಲರನ್ನೂ ಆಕರ್ಷಿಸುತ್ತಿದೆ ಮತ್ತು ತನ್ನ ವಿಶಿಷ್ಟವಾದ ಸಂಸ್ಕೃತಿಯನ್ನು ಇಂದಿಗೂ ಬೆಳೆಸಿ ಉಳಿಸಿಕೊಂಡಿದೆ ಎಂದರು.