ನೌಕರರ ಪ್ರತಿಭಟನೆಗೆ ಕನ್ನಡ ಒಕ್ಕೂಟವು ಬೆಂಬಲಕ್ಕೆ ವ್ಯಕ್ತಪಡಿಸಿ ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ‘ಕೇಂದ್ರ ಸರ್ಕಾರವು ಈ ನೌಕರರಿಗೆ ಅನ್ಯಾಯ ಮಾಡುತ್ತಿದೆ. ನ್ಯಾಯಬದ್ಧ ಹಾಗೂ ಸಂವಿಧಾನಬದ್ಧ ಬೇಡಿಕೆಗಳನ್ನು ಪ್ರಧಾನಿ ಮೋದಿ ಅವರ ಸರ್ಕಾರ ಏಕೆ ಪರಿಗಣಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.