ಮುಂದಿನ ಅಕ್ಟೋಬರ್ 2ರೊಳಗೆ ದಾವಣಗೆರೆ, ಹರಿಹರ, ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳನ್ನು ಬಯಲು ಶೌಚಮುಕ್ತ ತಾಲ್ಲೂಕು ಎಂದು ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನವೆಂಬರ್ 19ರೊಳಗೆ ಉಳಿದ ಎರಡು ತಾಲ್ಲೂಕುಗಳಾದ ಜಗಳೂರು ಮತ್ತು ಹರಪನಹಳ್ಳಿಯನ್ನು ಈ ವ್ಯಾಪ್ತಿಗೆ ತಂದು ಆ ಮೂಲಕ ಜಿಲ್ಲೆಯನ್ನು ಬಯಲು ಶೌಚಮುಕ್ತ ಎಂದು ಘೋಷಿಸಲು ಪ್ರಯತ್ನ ನಡೆದಿದೆ ಎಂದರು.