ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಗೆ ಸಮುದಾಯ ಭವನಗಳ ಉದ್ಘಾಟನೆ-ಸಂಸದ ಧ್ರುವನಾರಾಯಣ

Last Updated 3 ಸೆಪ್ಟೆಂಬರ್ 2017, 8:12 IST
ಅಕ್ಷರ ಗಾತ್ರ

ಯಳಂದೂರು: ಪಟ್ಟಣದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ವಾಲ್ಮೀಕಿ ಸಮುದಾಯ ಭವನಗಳನ್ನು ಜನವರಿ ತಿಂಗಳಲ್ಲಿ ಉದ್ಘಾಟಿಸಲಾಗುವುದು ಎಂದು ಸಂಸದ ಆರ್. ಧ್ರುವನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಸಮುದಾಯ ಭವನಗಳ ಕಾಮಗಾರಿಯನ್ನು ಅವರು ಶುಕ್ರವಾರ ಪರಿಶೀಲಿಸಿ, ಮಾತನಾಡಿದರು. ಎಸ್ಇಪಿ ಹಾಗೂ ಟಿಎಸ್ಪಿ ಯೋಜನೆಯಡಿ ತಾಲ್ಲೂಕು ಮಟ್ಟದ ಸಮುದಾಯ ಭವನಗಳಿಗೆ ತಲಾ ₹ 1.5 ಕೋಟಿ ವಿಶೇಷ ಅನುದಾನ ನೀಡಿದೆ.

ಭೂಸೇನಾ ನಿಗಮ ಹಾಗೂ ನಿರ್ಮಿತಿ ಕೇಂದ್ರದ ವತಿಯಿಂದ ನಡೆಯುತ್ತಿರುವ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ವಾಲ್ಮೀಕಿ ಸಮುದಾಯ ಭನವದ ಕಾಮಗಾರಿ ನಿಧಾನವಾಗಿದೆ. ಸಾಮೂಹಿಕ ಶೌಚಾಲಯ, ಅಡುಗೆ ಮನೆ ಹಾಗೂ ಕೊಠಡಿಗಳ ನಿರ್ಮಾಣ ಕ್ರಿಯಾಯೋಜನೆ ಸಿದ್ದಪಡಿಸಬೇಕು. ಅಂಬೇಡ್ಕರ್ ಸಮುದಾಯ ಭವನದಲ್ಲೂ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಬಾಗಿಲು, ಕಿಟಕಿಗಳ ಗಾಜುಗಳನ್ನು ದುರಸ್ತಿ ಪಡಿಸಬೇಕು.

ಸುಣ್ಣಬಣ್ಣ ಬಳಿದು ಉಳಿದಿರುವ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಭೂ ಸೇನಾ ನಿಗಮದ ಅಧಿಕಾರಿಗಳಿಗೆ ತಾಕೀತು ಮಾಡಿದರು. ಶಾಸಕ ಎಸ್. ಜಯಣ್ಣ, ತಾ.ಪಂ. ಅಧ್ಯಕ್ಷ ನಂಜುಂಡಯ್ಯ, ಸದಸ್ಯ ವೆಂಕಟೇಶ್, ಪ.ಪಂ. ಅಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಭೀಮಪ್ಪ, ಸದಸ್ಯರಾದ ವೈ.ವಿ. ಉಮಾಶಂಕರ್, ಜೆ. ಶ್ರೀನಿವಾಸ್, ವೈ.ಎನ್. ಮುರುಳೀಕೃಷ್ಣ, ಅಂಬಳೆ ಗ್ರಾ.ಪಂ. ಅಧ್ಯಕ್ಷ ಶಿವರಾಮು, ಮುಖಂಡರಾದ ವಡಗೆರೆದಾಸ್, ಮುಡಿಗುಂಡ ಶಾಂತರಾಜು, ಕಂದಹಳ್ಳಿ ಮಹೇಶ್, ಮಹೇಶ್, ವೈ.ಜಿ. ರಂಗನಾಥ, ಜೆಇ ನಂದೀಶ್, ಭೂಸೇನಾ ನಿಗಮದ ಸಹಾಯಕ ನಿರ್ದೇಶಕ ಸುಂದರೇಶ್‌ ಮೂರ್ತಿ, ಎಇಇ ಮಹದೇವಪ್ರಸಾದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT