ಖತಲಸಾಬ ಸೇರಿದಂತೆ ನಾಲ್ವರು ಯುವಕರು ಬಾವಿಗಳಿದಿದ್ದರು. ಆದರೆ, ಖತಲಸಾಬ ನೀರಿನಲ್ಲಿ ಮುಳುಗಿದ್ದು, ಮೇಲಕ್ಕೆ ಬರಲಿಲ್ಲ. ನಂತರ ಯುವಕರು ಹುಡುಕಾಡಿದರೂ ಸಿಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಭಾನುವಾರ ಮೀನುಗಾರರು ಬಾವಿಯಲ್ಲಿ ಯುವಕನ ಮೃತದೇಹ ಪತ್ತೆ ಹಚ್ಚಿದರು. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.