ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

177 ಕಾರ್ಯಕರ್ತರು, 96 ಬೈಕ್ ವಶ

Last Updated 6 ಸೆಪ್ಟೆಂಬರ್ 2017, 6:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸಂಘ ಪರಿವಾರದ ಮುಖಂಡರ ಮೇಲಿನ ದೌರ್ಜನ್ಯ ಮತ್ತು ಹತ್ಯೆಗಳನ್ನು ಖಂಡಿಸಿ, ಬಿಜೆಪಿ ಯುವ ಮೋರ್ಚಾ ಕರೆ ನೀಡಿದ್ದ ‘ಮಂಗಳೂರು ಚಲೋ’ಗೆ ಬೆಂಬಲ ವ್ಯಕ್ತಪಡಿಸಿ, ಜಿಲ್ಲೆಯಾದ್ಯಂತ ಮಂಗಳವಾರ ಬೈಕ್‌ ರ್‌್ಯಾಲಿ ನಡೆಸಲು ಮುಂದಾದ 177 ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು, 96 ಬೈಕ್‌ಗಳನ್ನು ವಶಕ್ಕೆ ಪಡೆದರು.

ಚಿಕ್ಕಬಳ್ಳಾಪುರದಲ್ಲಿ 21 ಕಾರ್ಯಕರ್ತರು, 11 ಬೈಕ್, ಗೌರಿಬಿದನೂರಿನಲ್ಲಿ 50 ಕಾರ್ಯಕರ್ತರು, 30 ಬೈಕ್‌, ಗುಡಿಬಂಡೆಯಲ್ಲಿ 24 ಕಾರ್ಯಕರ್ತರು, 5 ಬೈಕ್‌, ಚಿಂತಾಮಣಿಯಲ್ಲಿ 12 ಕಾರ್ಯಕರ್ತರು, 8 ಬೈಕ್‌, ಬಾಗೇಪಲ್ಲಿಯಲ್ಲಿ 50 ಕಾರ್ಯಕರ್ತರು, 30 ಬೈಕ್‌ ಮತ್ತು ಶಿಡ್ಲಘಟ್ಟದಲ್ಲಿ 20 ಕಾರ್ಯಕರ್ತರು, 12 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದರು. ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯುವ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು, ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT