ಹುಣಸೂರು: ತಾಲ್ಲೂಕಿನಾದ್ಯಂತ ಶುಕ್ರವಾರ ಮಧ್ಯರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಹುಣಸೂರು –ಕೆ.ಆರ್.ನಗರ ಮುಖ್ಯರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಿದೆ.
ಮಳೆ, ಗಾಳಿಗೆ ರಸ್ತೆ ಅಂಚಿನ ಮರ ನೆಲಕ್ಕುರುಳಿದ ಕಾರಣ ಖಾಸಗಿ ಹತ್ತಿ ಗಿರಣಿಗೆ ವಿದ್ಯುತ್ ಸರಬರಾಜು ಸಂಪರ್ಕ ಕಡಿತಗೊಂಡಿತ್ತು. ಒಟ್ಟು 8 ವಿದ್ಯುತ್ ಕಂಬಗಳು ಉರುಳಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಆಕ್ಷೇಪ: ತಂಬಾಕು ಮಂಡಳಿ ನಿರ್ದೇಶಕ ಕಿರಣ್ ಕುಮಾರ್, ಸೆಸ್ಕ್ ತುರ್ತು ದುರಸ್ತಿ ಕ್ರಮ ಕೈಗೊಂಡಿದ್ದು, ಸ್ವಾಗತಾರ್ಹ ಎಂದು ಹೇಳಿದರು. ಹಳ್ಳಿಗಳ ಕಡೆ ಕೃಷಿ ಪಂಪ್ ಸೆಟ್ ಗೆ ಸಂಪರ್ಕ ಕಲ್ಪಿಸುವ ಕಂಬಗಳು ಉರುಳಿದ್ದು, ಅವುಗಳ ದುರಸ್ತಿಗೂ ಮುಂದಾಗಬೇಕು ಎಂದು ಕೋರಿದರು.