ಸಿದ್ದಾಪುರ: ಮಾಲ್ದಾರೆ ಮತ್ತು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಭಾಗಗಳಲ್ಲಿ ಕೆಲ ದಿನಗಳಿಂದ ಆತಂಕ ಮೂಡಿಸುತ್ತಿದ್ದ ಹುಲಿ ಬೇಟೆಗಾಗಿ ಅರಣ್ಯಇಲಾಖೆ ಶನಿವಾರ ಮಲ್ದಾರೆ ಸಮೀಪ ಬೋನು ಅಳವಡಿಸಿದೆ.
ಕಳೆದ ಎರೆಡು ವಾರಗಳಿಂದ ಈ ಭಾಗದ ಅನೇಕ ಕಡೆಗಳಲ್ಲಿ ಹುಲಿ ಹೆಜ್ಜೆಗಳು ಕಂಡು ಬಂದಿದ್ದು ಇಲ್ಲಿನ ಕಾಫಿ ಬೆಳೆಗಾರರಲ್ಲಿ ಹಾಗೂ ಕಾರ್ಮಿಕರಲ್ಲಿ ಆತಂಕ ಮೂಡಿಸಿತ್ತು.
ಬಹಳಷ್ಟು ಜಾನುವಾರು ಕೂಡ ಹುಲಿ ದಾಳಿಗೆ ಬಲಿಯಾಗಿವೆ.
ಹುಲಿ ಎಲ್ಲಿ ಇರಬಹುದು ಎಂಬ ಬಗ್ಗೆ ನಿಖರವಾಗಿ ಗುರುತಿಸಲು ಅರಣ್ಯ ಇಲಾಖೆಗೆ ಸಾಧ್ಯ ವಾಗದ ಕಾರಣ ಬೋನ್ ಅಳವಡಿಸಲು ವಿಳಂಬವಾಯಿತು ಎನ್ನಲಾಗಿದೆ