ಬೆಳಿಗ್ಗೆ ಕುಂಭೇಶ್ವರ ಪೂಜೆ, ವೇದ ಪಾರಾಯಣ, ಮಹಾ ಸಂಕಲ್ಪ, ಪುಣ್ಯ ಸ್ನಾನ, ತೀರ್ಥ ಪ್ರೋಕ್ಷಣೆ, ಸಾಮೂಹಿಕ ಭಜನೆಗಳು ಜರುಗಿದವು. ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್ ಶರ್ಮಾ, ಅಭಿನವ ಭಾರತ್ ತಂಡದ ಮುಖ್ಯಸ್ಥ ಕೆ.ಎಸ್.ಲಕ್ಷ್ಮೀಶ್ ಅವರ ತಂಡ ಪುಷ್ಕರದ ಕೈಂಕರ್ಯಗಳನ್ನು ನೆರವೇರಿಸಿದರು.