ಕಲಬುರ್ಗಿ: ಕಲಬುರ್ಗಿಯಿಂದ ಸೇಡಂಗೆ ತೆರಳುತ್ತಿದ್ದ ಎನ್ಇಕೆಆರ್ಟಿಸಿ ಬಸ್ನಲ್ಲೇ ಗರ್ಭಿಣಿಯೊಬ್ಬರು ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದರು.
ಚಿಂಚೋಳಿ ತಾಲ್ಲೂಕು ಛತ್ರಸಾಲ ಗ್ರಾಮದ ಜ್ಯೋತಿ ಮಗುವಿಗೆ ಜನ್ಮ ನೀಡಿದವರು. ವಿಷಯ ಅರಿತ ಬಸ್ ಚಾಲಕ ಶಿವಾಜಿ ಹಾಗೂ ನಿರ್ವಾಹಕ ಪ್ರಶಾಂತ್ ಅವರು ಬಸ್ಅನ್ನು ನೇರವಾಗಿ ಆಸ್ಪತ್ರೆಯತ್ತ ಚಲಾಯಿಸಿದರು.
ತಾಯಿ, ಮಗು ಸುರಕ್ಷಿತವಾಗಿದ್ದಾರೆ. ಶಿವಾಜಿ ಹಾಗೂ ಪ್ರಶಾಂತ್ ಅವರ ಮಾನವೀಯತೆಗೆ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದರು.
‘ಕಲಬುರ್ಗಿಯಲ್ಲಿದ್ದ ಜ್ಯೋತಿ ಅವರು ಹೆರಿಗೆಗಾಗಿ ಸೇಡಂ ತಾಲ್ಲೂಕಿನ ತಾಂಡೂರಕ್ಕೆ ತೆರಳುತ್ತಿದ್ದರು. ಬಸ್ನಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಲ್ಲಿಯೇ ಮಗುವಿನ ಜನ್ಮ ನೀಡಿದರು’ ಎಂದು ಸಹ ಪ್ರಯಾಣಿಕರು ತಿಳಿಸಿದರು.