ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಂದೀಪ್ ಕುಮಾರ್, ‘ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 4ಕ್ಕೆ ಹಬ್ಬವನ್ನು ಆಚರಿಸಲಾಗುತ್ತದೆ. ಇದು ತೆಲಂಗಾಣದ ಸಾಂಪ್ರದಾಯಿಕ ನಾಡಹಬ್ಬ. ಮಹಿಳೆಯರೇ ಆಚರಿಸುವ ಈ ಹಬ್ಬದಲ್ಲಿ ಮದುವೆಯ ಹೊಸ್ತಿಲಿನಲ್ಲಿರುವ ಹೆಣ್ಣು ಮಕ್ಕಳು ಭಾಗವಹಿಸುವುದು ವಾಡಿಕೆ. ಬತುಕಮ್ಮ ಅಥವಾ ಪಾರ್ವತಿ ದೇವಿಗೆ ಹೂವುಗಳೆಂದರೆ ಪಂಚಪ್ರಾಣ. ಹಾಗಾಗಿ, ಅರಿಶಿನ ಅಥವಾ ಮಣ್ಣಿನಿಂದ ಮಾಡಿದ ದೇವಿಯ ಪ್ರತಿಮೆಗೆ ಹೂವುಗಳಿಂದ ಅಲಂಕಾರ ಮಾಡಿ ಪೂಜಿಸಲಾಗುತ್ತದೆ’ ಎಂದರು.