ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‍ಎಸ್ಎಸ್ ಭಾರತವನ್ನು ಹಿಂದೂ, ಹಿಂದಿ, ಹಿಂದೂಸ್ತಾನವನ್ನಾಗಿಸಲು ಯತ್ನಿಸುತ್ತಿದೆ

Last Updated 22 ಸೆಪ್ಟೆಂಬರ್ 2017, 12:12 IST
ಅಕ್ಷರ ಗಾತ್ರ

ಚೆನ್ನೈ: ಆರ್‍ಎಸ್ಎಸ್ ಭಾರತವನ್ನು ಹಿಂದೂ, ಹಿಂದಿ, ಹಿಂದೂಸ್ತಾನವನ್ನಾಗಿಸಲು ಯತ್ನಿಸುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಚೆನ್ನೈನಲ್ಲಿ ವಿದುತಲೈ ಚಿರುತಗಳ್ ಕಾಟ್ಚಿ (ವಿಸಿಕೆ) ಆಯೋಜಿಸಿದ ರಾಜ್ಯ ಸ್ವಾಯುತ್ತತೆ ಸಮಾವೇಶದಲ್ಲಿ ಮಾತನಾಡಿದ ಪಿಣರಾಯಿ ಆರ್‍ಎಸ್ಎಸ್, ಸಂಘ ಪರಿವಾರ ಮತ್ತು ಇದೆಲ್ಲದಕ್ಕೂ ನಿರ್ದೇಶನ ನೀಡುತ್ತಿರುವ ಬಿಜೆಪಿ ಒಕ್ಕೂಟವಾದ (ಫೆಡರಲಿಸಂ)ನ ಉದ್ದೇಶವನ್ನೇ ಒಡೆಯಲು ಯತ್ನಿಸುತ್ತಿದೆ ಎಂದಿದ್ದಾರೆ.

ಆರ್‍ಎಸ್ಎಸ್ ರಾಜ್ಯ ಸರ್ಕಾರಗಳನ್ನು ದುರ್ಬಲವಾಗಿಸಲು ಯತ್ನಿಸುತ್ತಿವೆ. ಇದಕ್ಕಾಗಿ ಅವರು ಒಕ್ಕೂಟವಾದವನ್ನು ಒಡೆದು ಹಿಂದಿ, ಹಿಂದೂ, ಹಿಂದೂಸ್ತಾನವನ್ನಾಗಿಸುವ ಉದ್ದೇಶವನ್ನು ಹೇರುತ್ತಿದ್ದಾರೆ. ಬಿಜೆಪಿಯೂ ಇದೇ ರೀತಿ ಮಾಡುತ್ತಿದ್ದು ಅವರ ಈ ಯತ್ನವನ್ನು ವಿಫಲಗೊಳಿಸಬೇಕಿದೆ. ಬಿಜೆಪಿಯ ಈ ಕೃತ್ಯಗಳು ಹಲವಾರು ಬಾರಿ ಬಯಲಾಗಿವೆ.

ಸಂಘ ಮತ್ತು ಬಿಜೆಪಿಯ ವಿರುದ್ಧ ಹರಿಹಾಯ್ದ ಪಿಣರಾಯಿ, ಭಾರತ ದೇಶದಲ್ಲಿ ಬಹು ಭಾಷಿಗರು ಮತ್ತು ಬಹು ಸಂಸ್ಕೃತಿ ಇದೆ ಎಂಬುದನ್ನು ಆರ್‍ಎಸ್ಎಸ್ ಮರೆತಂತಿದೆ. ಹಾಗಾಗಿ ಅವರು ಒಂದೇ ಸಂಸ್ಕೃತಿ ಮತ್ತು ಒಂದು ಭಾಷೆಯನ್ನು ಹೇರಲು ಯತ್ನಿಸುತ್ತಿದ್ದಾರೆ. ಆರ್‍ಎಸ್ಎಸ್ ಮತ್ತು ಬಿಜೆಪಿ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವುದಕ್ಕಾಗಿ ರಾಷ್ಟ್ರೀಯ ಅಜೆಂಡಾವೊಂದನ್ನು ಕೈಗೆತ್ತಿಕೊಂಡಿದೆ ಎಂದು ಆರೋಪಿಸಿದ್ದಾರೆ.

1959ರಲ್ಲಿ ಕೇರಳದಲ್ಲಿ ಅಧಿಕಾರಕ್ಕೇರಿದ ಕಮ್ಯೂನಿಸ್ಟ್ ಸರ್ಕಾರನ್ನು ವಜಾ ಮಾಡುವ ಮೂಲಕ ಮೊದಲ ಬಾರಿ ಕಾಂಗ್ರೆಸ್ ಒಕ್ಕೂಟ ವ್ಯವಸ್ಥೆ ಮೇಲೆ ದಾಳಿ ಮಾಡಿತ್ತು. ಇದೀಗ ಬಿಜೆಪಿ ಅದರ ಪರಿಧಿಗಳನ್ನು ವಿಸ್ತರಿಸುತ್ತಿದೆ. ನಮ್ಮ ಸಂವಿಧಾನವೇ ಒಕ್ಕೂಟ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಿದ್ದು, ಈ ವ್ಯವಸ್ಥೆಯನ್ನು ದೃಢಪಡಿಸಬೇಕಿದೆ.

ನಾವು ನಮ್ಮ ಸಂವಿಧಾನವನ್ನು ಬಲಪಡಿಸಬೇಕು. ಒಕ್ಕೂಟವಾದದ ಪುನರ್ವಿಮರ್ಶೆ ಮತ್ತು  ರಾಜ್ಯ-ಕೇಂದ್ರ ಸರ್ಕಾರದ ಸಂಬಂಧಗಳು ಒಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಗತ್ಯ ಎಂದು ಪಿಣರಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT