ಅಪರಾಧಿ ಮಕ್ಕಳನ್ನು ಕೊಲೆ ಮಾಡುವ ಹಿಂದಿನ ದಿನವಷ್ಟೇ ತುಮಕೂರಿನಲ್ಲಿ ತನ್ನ ನಾದಿನಿ ಸವಿತಾ, ಅತ್ತೆ ಸರಸ್ವತಿ ಅವರನ್ನು ಕೊಲೆ ಮಾಡಿದ್ದರು. ನಾಯಕ್, ನಾದಿನಿಗೆ ಬೆಂಗಳೂರಿನ ಭವಿಷ್ಯ ನಿಧಿ ಇಲಾಖೆಯಲ್ಲಿ ಕೆಲಸ ಕೊಡಿಸಲು ನೆರವಾಗಿದ್ದರು. ಕೆಲಸಕ್ಕೆ ಸೇರಿದ ಬಳಿಕ ಸವಿತಾ ತನ್ನ ಸಹೋದ್ಯೋಗಿ ಜೊತೆ ಅನ್ಯೋನ್ಯತೆ ಹೊಂದಿದ್ದರು ಎಂಬ ಕಾರಣಕ್ಕೆ ರಮೇಶ್ ನಾಯಕ್ ಅತೃಪ್ತಿ ಹೊಂದಿದ್ದರು. ಇದರಿಂದ ಅವರಿಗೆ ನಾದಿನಿ ಮೇಲೆ ಕ್ರೋಧವಿತ್ತು’ ಎಂಬ ಅಂಶ ತನಿಖೆಯಲ್ಲಿ ಕಂಡು ಬಂದಿತ್ತು.