ಮಾಗಡಿ: ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆಯ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ ಎಂದು ಹಿರಿಯ ಕಲಾವಿದೆ ಜಯಮ್ಮ ಕುಂಬಯ್ಯ ತಿಳಿಸಿದರು.
ದಸರಾ ಹಬ್ಬದ ಅಂಗವಾಗಿ ಬೊಂಬೆಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ದಸರಾ ಬೊಂಬೆಗಳ ಪ್ರದರ್ಶನದಿಂದ ಮಾನಸಿಕ ಮತ್ತು ಆಧ್ಯಾತ್ಮಿಕ ನೆಮ್ಮದಿ ಸಿಕ್ಕಿದೆ. ಪ್ರತಿನಿತ್ಯ ಪಟ್ಟಣದ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಬಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.
ರಾಜನ ದರ್ಬಾರ್ ಬೊಂಬೆಗಳು, ರಾಮಸೀತೆಯರ ಬೊಂಬೆಗಳ ಜೊತೆಗೆ ಕೆಂಪೇಗೌಡರ ಕಾಲದ ಮರದ ಬೊಂಬೆಗಳು ಮತ್ತು ಶಿರಡಿ ಸಾಯಿಬಾಬಾ ದೇಗುಲದ ಬೊಂಬೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೇವೆ ಎಂದು ಜಯಮ್ಮ ಕುಂಬಯ್ಯ ವಿವರಿಸಿದರು.
ಹಿರಿಯರಾದ ಕುಂಬಯ್ಯ, ಹಿರಿಯ ದಾದಿ ಮಂಜುಳ, ಎಂ.ಕೆ.ಪ್ರಶಾಂತ್, ಬಿ.ವಿ,ಗೀತಾ, ಎಂ.ಕೆ. ಪ್ರವೀಣ್, ಹಿಮಾನಿ, ಗೀತಾ ಇದ್ದರು. ರಾಜ ರಾಣಿ ಬೊಂಬೆ, ಸೈನಿಕರ, ರೈತರು ಬೊಂಬೆಗಳು ಗಮನ ಸೆಳೆದವು.