ಹನ್ನೆರಡನೇ ಶತಮಾನ ಕತೆ ಬಿಡಿ. 21ನೇ ಶತಮಾನಕ್ಕೆ ಕಾಲಿಟ್ಟರೂ ಲಿಂಗಾಯತರ ಶೋಷಣೆ ತಪ್ಪಿಲ್ಲ. ಸಿಖ್, ಬೌದ್ಧ... ಧರ್ಮಗಳು ಸ್ವತಂತ್ರ ಧರ್ಮಗಳು. ಅವುಗಳಿಗೆ ಒಬ್ಬೊಬ್ಬರೇ ಧರ್ಮಗುರು. ಅದೇ ರೀತಿ ಲಿಂಗಾಯತ ಧರ್ಮಕ್ಕೆ ಬಸವಣ್ಣನೊಬ್ಬನೇ ಗುರು. ವೀರಶೈವರೂ ಲಿಂಗಾಯತರೊಟ್ಟಿಗೆ ಇರಬಹುದು. ಕಾಯಕವೇ ಕೈಲಾಸವೆಂದಿರುವ ಬಸವಣ್ಣನನ್ನು ಗುರು ಎಂದು ಮತ್ತು ವಚನ ಸಾಹಿತ್ಯವೇ ಧರ್ಮಗ್ರಂಥ ಎಂದು ಒಪ್ಪಿಕೊಳ್ಳಲಿ.