ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ‘ವಿಚಾರವಾದಿಗಳ ಹತ್ಯೆಗಳು ಸರಣಿಯಾಗಿ ನಡೆಯುತ್ತಿದ್ದರೂ, ಕೊಲೆಯ ಹಿಂದಿರುವ ಶಕ್ತಿ ಬೆಳಕಿಗೆ ಬರುತ್ತಿಲ್ಲ. ಈಗ ಗಾಂಧಿ ಹತ್ಯೆಯ ಬಗ್ಗೆ ಹೊಸ ತಗಾದೆ ಹುಟ್ಟುಹಾಕುತ್ತಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ. ಕೋಮುವಾದ, ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಬಹುದೊಡ್ಡ ಚಳವಳಿಗೆ ಎಲ್ಲರೂ ಒಗ್ಗೂಡಬೇಕಾದ ಅನಿವಾರ್ಯ ಎದುರಾಗಿದೆ ಎಂದರು.