‘ನಾನು ಬರವಣಿಗೆ ಆರಂಭಿಸಿದ ಕಾಲದಲ್ಲಿ ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆಗೆ ಅವಕಾಶವಿತ್ತು. ಇತ್ತೀಚಿನ ವರ್ಷಗಳಲ್ಲಿ ಆ ಅವಕಾಶ ಕ್ಷೀಣಿಸುತ್ತಾ ಪೂರ್ಣ ಮರೆಯಾಗುವವರೆಗೆ ಬಂದಿದೆ. ಪುಸ್ತಕ ವಿಮರ್ಶೆಯಿಂದ ನಮ್ಮನ್ನು ನಾವು ನೋಡಿಕೊಳ್ಳುವ ಅವಕಾಶ ನಮ್ಮ ತಲೆಮಾರಿಗಿತ್ತು. ಆ ಅವಕಾಶ ಈ ತಲೆಮಾರಿಗಿಲ್ಲ’ ಎಂದು ವಿಷಾದಿಸಿದ ಅವರು, ಕನ್ನಡ ಪುಸ್ತಕಗಳ ವಿಮರ್ಶೆಗೆ ಅವಕಾಶ ಮಾಡಿಕೊಡುವಂತೆ ಪತ್ರಿಕೆಗಳಲ್ಲಿ ಮನವಿ ಮಾಡಿಕೊಂಡರು.