ಸ್ಪರ್ಧೆಗೆ ಒಟ್ಟು 95 ಹಸ್ತಪ್ರತಿಗಳು ಬಂದಿದ್ದು, ‘ಜಟಾಯು ಪಕ್ಷಿಗೆ ಶ್ರದ್ಧಾಂಜಲಿ’ ಎನ್ನುವ ಹಸ್ತಪ್ರತಿಯು ಸರ್ವಶ್ರೇಷ್ಠ ಕೃತಿ ಎಂದು ಪ್ರೊ. ಮಲ್ಲೇ ಪುರಂ ಜಿ. ವೆಂಕಟೇಶ್, ಬೆಳಗೋಡು ರಮೇಶ ಭಟ್, ಸುಬ್ರಾಯ ಚೊಕ್ಕಾಡಿ ಅವರು ನೀಡಿದ ಅಂಕಗಳ ಆಧಾರದಲ್ಲಿ ನಿರ್ಣಯಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ನಾ ಮೊಗಸಾಲೆ ತಿಳಿಸಿದ್ದಾರೆ.