‘ಸಾಹಿತಿಗಳ ಎಲ್ಲ ಬರಹಗಳು ಸರಳವಾಗಿರುವುದಿಲ್ಲ. ಕೆಲವೊಂದು ಸಂಕೀರ್ಣವಾಗಿಯೂ ಇರುತ್ತವೆ. ಇದು ಸರ್ವೇಸಾಮಾನ್ಯ. ಅಂತೆಯೇ, ಅಡಿಗರ ಒಂದಷ್ಟು ಕಾವ್ಯಗಳು ಸಂಕೀರ್ಣವಾಗಿರುವುದು ನಿಜ. ಅವರು ಕೂಡ ಸರಳ ಸುಂದರ ಸಾಹಿತ್ಯದ ಮೂಲಕ ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಆದರೆ, ಅವರ ಕವಿತೆಗಳು ಜನರಿಗೆ ಅರ್ಥವಾಗುವುದೇ ಇಲ್ಲ ಎಂದು ಸಾಹಿತ್ಯದ ಒಂದು ವಲಯ ಅಪಪ್ರಚಾರ ನಡೆಸಿತು’ ಎಂದರು.