ಕಾರ್ಯಕ್ರಮವನ್ನು ಉದ್ಘಾಟಿಸಿದ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಮಕ್ಕಳಿಗೆ ಅಕ್ಷರ ಜ್ಞಾನವಿದ್ದರೆ ಸಾಲದು. ಅದರ ಜತೆ ಸಂಸ್ಕಾರವೂ ಇರಬೇಕು ಎಂದರು. ಡೀನ್ ವೈ.ಪಿ.ಮಲ್ಲೇಗೌಡ ಅವರು, ಗಡಿ, ಭಾಷಾ ಸಮಸ್ಯೆಗಳು ಜನರನ್ನು ಕಾಡುತ್ತಿವೆ ಎಂದರು. ಕನ್ನಡ ಸಂಘಟನೆಗಳು ರಾಜ್ಯದ ನೆಲ, ಜಲಕ್ಕಾಗಿ ಹೋರಾಡುವುದು ಅನಿವಾರ್ಯ ಎಂದರು. ಚನ್ನಯ್ಯ ಸ್ವಾಗತಿಸಿದರು, ಚಂದ್ರಕಲಾ ವಂದಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.