ಗಮಕಿ ಎಚ್. ಉಷಾ ಎಕ್ಕುಂಡಿ, ‘ಅವಧೂತ’ ಮತ್ತು ‘ವಸ್ತ್ರಾಪಹರಣ’ದ ಕೆಲ ಪದ್ಯಗಳನ್ನು ಗಮಕ ರೂಪದಲ್ಲಿ ಪ್ರಸ್ತುತಪಡಿಸಿದರು. ಎಕ್ಕುಂಡಿ ಅವರ ಹಿರಿಯ ಮಗಳು ಭಾರತಿ, ‘ತಂಬೂರಿ ಶ್ರುತಿ ಮಾಡಿ ಬಂದಾನೋ’ ಗೀತೆ ಹಾಡಿದರು. ಹಿರಿಯ ಗಾಯಕ ಗರ್ತಿಕೆರೆ ರಾಘಣ್ಣ, ‘ಅಮ್ಮ ನಿಮ್ಮ ಮನೆಗಳಲ್ಲಿ ಕಂಡಿರೇನು ಕಂದನಾ’, ‘ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ’, ‘ಎಂದು ನೀಡುವಿ ನಿನ್ನ ದರುಶನವ ಎನಗೆ’ ಕವಿತೆಗಳನ್ನು ಹಾಡಿದರು. ಎಸ್.ಮಧುಸೂದನ್ ಹಾಗೂ ಎಲ್.ಎನ್. ವಸಂತಕುಮಾರ್ ವಾದ್ಯ ಸಹಕಾರ ನೀಡಿದರು.